ಬುಧವಾರ, ಏಪ್ರಿಲ್ 20, 2011

ಚುಟುಕು

ಪಯಣ 

ಕತ್ತಲ ಭಯದಿ ಓಡಿ ಹೊರಟರೆ
ಬೆಳದಿಂಗಳೂ ದಾರಿ ತೋರದು,
ಬೆದರಿ-ಬಿಕ್ಕುತ ದಿಕ್ಕು ತಪ್ಪಿದರೆ
ಜೀವನದಿ ಸಾಗರನ ಬಳಿಸೇರದು.

ಗಾಳಿ ಬಂದಾಗ ತೂರಿಕೊಂಡವ  ಮೇಲೇರಿದ
ಮುದುಡಿದವ ಮುಂದೆ ಮರುಗುವ 'ಮೇಲೇರದೆ'!.
ಬರಿ ಕನಸ ಕಂಡವ ಎಣಿಸಿದ- ಹೀಗಾದರೆ..............
ನಿಜವಾದ ಕನಸಿಗ ಮಾಡಿತೋರಿಸಿದ ಬೆರಗಾದಿರೇ.?


ನಗು

ಪ್ರೀತಿಯಾ ಪರಿಗೆ ಮೆಲ್ಲ ಜಾರಿದಾಮುತ್ತು 
ಮುಗ್ದ ಕೆನ್ನೆಯ ಮೇಲೆ ನಲಿದಾಡಿತು.....
ಏನೂ ಅರಿಯದ ಮುದ್ದು ಕಂದಮ್ಮ 
ತಾಯಿ ಪ್ರೀತಿಯ ಸವಿದು ಮೆಲ್ಲ ನಕ್ಕಿತು!    

-ಪ್ರಸಾದ್

    

1 ಕಾಮೆಂಟ್‌: