ಮಂಗಳವಾರ, ಮೇ 28, 2013

!---------- ಸಿದ್ದು ಪೋಯಂ --------!

ಕಾವೇರಿ ನಿಲಯಂ 
ಖಾಲಿ ಆಲಯಂ 
ಖುರ್ಚಿ ಭಯಂ 
ಸಂಪೂರ್ಣ - ಕಾರಣಂ!

- 'ಜೀವಿ' ©  (ಗುರುಪ್ರಸಾದ ಹೆಗಡೆ) 

ಸಂದರ್ಭ: ಸಿದ್ದು - ಸೀಎಂ ನಿವಾಸ 'ಕಾವೇರಿ' ಗೆ ಹೋಗಲ್ವಂತೆ; 
ಹಿಂದೆ ಡೀ.ಸಿ.ಎಂ ಆಗಿದ್ದಾಗ ಅಲ್ಲಿ ಇದ್ದು ಹುದ್ದೆ ಕಳ್ಕೊಂಡಿದ್ರು!!!

ಸೋಮವಾರ, ಮೇ 27, 2013

ಕೊನೆಯ ಕ್ಷಣ.

ಬಾಗಿಲು ತೆರೆದಿಡಿ
ಹೋಗ ಬೇಕಿದೆ ನಾನು
ಎಂದ ನನ್ನ ಅಜ್ಜ
ನಿಜಕ್ಕೂ ಹೊರಟು
ಹೋಗಿಯೇ ಬಿಟ್ಟ,

ಎಲ್ಲರಿಗೂ ಲಭಿಸದ
ಸುಲಭ ಸಾವು ಅದು
ಕರ್ತವ್ಯ ಪೂರೈಸಿದ
ಅಧಿಕಾರಿ ನಿವೃತ್ತಿಯ
ದಿನ ಕಛೇರಿ ಬಿಟ್ಟಂತೆ,

ನನಗೂ ಅಂಥ
ಸಾವು ಬಂದರೆ
ಖಂಡಿತ ಬೇಡ
ಎನ್ನಲಾರೆ, ಸಾರ್ಥಕ
ಜೀವನದ ಕೊನೆಯ
ಕ್ಷಣವದು...!

------ 'ಜೀವಿ'  ©  (ಗುರುಪ್ರಸಾದ ಹೆಗಡೆ)