ಸೋಮವಾರ, ಮೇ 27, 2013

ಕೊನೆಯ ಕ್ಷಣ.

ಬಾಗಿಲು ತೆರೆದಿಡಿ
ಹೋಗ ಬೇಕಿದೆ ನಾನು
ಎಂದ ನನ್ನ ಅಜ್ಜ
ನಿಜಕ್ಕೂ ಹೊರಟು
ಹೋಗಿಯೇ ಬಿಟ್ಟ,

ಎಲ್ಲರಿಗೂ ಲಭಿಸದ
ಸುಲಭ ಸಾವು ಅದು
ಕರ್ತವ್ಯ ಪೂರೈಸಿದ
ಅಧಿಕಾರಿ ನಿವೃತ್ತಿಯ
ದಿನ ಕಛೇರಿ ಬಿಟ್ಟಂತೆ,

ನನಗೂ ಅಂಥ
ಸಾವು ಬಂದರೆ
ಖಂಡಿತ ಬೇಡ
ಎನ್ನಲಾರೆ, ಸಾರ್ಥಕ
ಜೀವನದ ಕೊನೆಯ
ಕ್ಷಣವದು...!

------ 'ಜೀವಿ'  ©  (ಗುರುಪ್ರಸಾದ ಹೆಗಡೆ)




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ