ಶನಿವಾರ, ಸೆಪ್ಟೆಂಬರ್ 17, 2011

'ಪರಿ' ಬಿ.ಡಿ.ಟಿ ಅಭಿಯಂತರರ ಚಿತ್ರದ 'ಹಾಡು ಹಬ್ಬ ಸಂಭ್ರಮ' ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿ ಬಂದೆವು.
ಮನಸಿಗೆ ಹಿತ ನೀಡುವ ತುಂಬ ಒಳ್ಳೆಯ ಹಾಡುಗಳು ಮೂಡಿಬಂದಿವೆ. ನಾಗತಿಹಳ್ಳಿ ಚಂದ್ರಶೇಖರ ಅವರು ಹೇಳಿದಂತೆ ಸುಧಿರಾಜ್ ಅತ್ತಾವರರ ಗೀತ ಸಾಹಿತ್ಯ, ಹಳೆಯ ಮಾಧುರ್ಯದೊಂದಿಗೆ-ಹೊಸ ಪ್ರಯೋಗ ಕೂಡ ಅಭಿನಂದನೀಯ. 
ಕಾರ್ಯಕ್ರಮ ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಭಗು ಎಂಬಂತೆ ಹಿರಿ-ಕಿರಿಯರೆಲ್ಲರಿಂದ ಶ್ರೀಮಂತವಾಗಿ , ಅಚ್ಚುಕಟ್ಟಾಗಿ ಮೂಡಿಬಂತು. ಚಿತ್ರರಂಗದ ದಿಗ್ಗಜರಿಗೆ ಸಮ್ಮಾನ ನೀಡಿದ್ದರಿಂದ; ನಮಗೆ ಅವರುಗಳನ್ನ ನೋಡುವ ಸುಸಂಧರ್ಭ ಒದಗಿಬಂತು. ಉಷಾ ಉತ್ತುಪ್ ರ ಹಾಡುಗಳು ಮುದನೀಡಿದವು.ನಾಯಕ-ನಾಯಕಿಯರ ನೃತ್ಯ ಚೆನ್ನಾಗಿತ್ತು. ಸಮಸ್ತ ನಿರ್ಮಾಪಕ ವೃಂದದ ಸಾಹಸ ಮೆಚ್ಚಲೇಬೇಕಾದ್ದು. ಹೊಸ ಪ್ರಯತ್ನವನ್ನು ವೀಕ್ಷಿಸಿ ಪ್ರೋತ್ಸಾಹಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕಿದೆ. 'ಪರಿ' ಚಲನಚಿತ್ರ ಯಶಸ್ವಿಯಾಗಲಿ.